Thursday, July 24, 2008

ಜಾಲಹಳ್ಳಿಯ ಲಕ್ಷ್ಮಿಗೆ ನ್ಯಾಯ ಕೊಡಿಸುವವರು ‍ಯಾರು?

ಆಪ್ ಕೊ ಬಿಲ್‌ಕುಲ್ ಶರಮ್ ನಹೀ ಎಂಬ ನನ್ನ ಲೇಖನಕ್ಕೆ ಡೆಕ್ಕನ್ ಹೆರಾಲ್ಡ್ ವರದಿಗಾರ ಸತೀಶ್ ಶಿಲೆ ಪ್ರತಿಕ್ರಿಯಿಸಿದ್ದಾರೆ. ಜಾಲಹಳ್ಳಿಯಲ್ಲಿ ನಡೆದ ಲಕ್ಷ್ಮಿ ಕೊಲೆಯನ್ನು ಉಲ್ಲೇಖಿಸಿ, ನಮ್ಮ ಮೀಡಿಯಾಗಳ ಇಬ್ಬಂದಿತನವನ್ನು ಬಯಲಾಗಿಸಿದ್ದಾರೆ. ಅವರ ಪ್ರತಿಕ್ರಿಯೆ ಹೀಗಿದೆ:

``write-up on arushi murder is timely. media should have little bit decensy. the whole electronic media went on putting up concocted stories on aurshi murder. but in case of gang rape and murder of 13-year old Lakshmi, daughter of poor parents in Jalahalli, the media behaved as if it is not at all concerned. If Arushi and Lakshmi had born in same place, they would have been studying in a same school. Newspapers dismissed the story as a routine crime report, while electronic media remained mum. Just because Lakshmi’s is not a high-profile case. You don’t have doctor-father for Lakshmi to drag him to the incident.
It is true hamko bilkul sharam nahi...’’

ಸತೀಶ್ ಶಿಲೆಯವರ ಅಭಿಪ್ರಾಯವನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನ ಇಲ್ಲಿದೆ.

ಲಕ್ಷ್ಮಿಗೂ ನ್ಯಾಯ ಬೇಡವೇ?

ಬೆಂಗಳೂರಿನ ಜಾಲಹಳ್ಳಿಯಲ್ಲಿ ೧೩ ವರ್ಷದ ಲಕ್ಷ್ಮಿಯನ್ನು ಬಿಹಾರಿ ದುರುಳರು ಹರಿದು ತಿಂದು ಮೂರು ದಿನಗಳಾದವು. ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ ಇದುವರೆಗೆ ಯಾರನ್ನೂ ಅಧಿಕೃತವಾಗಿ ಬಂಧಿಸಲಾಗಿಲ್ಲ.

ಕಳೆದ ಸೋಮವಾರ ಮೂಲತಃ ಗುಲ್ಬರ್ಗ ಜಿಲ್ಲೆಯ ಶಿವರಾಯಪ್ಪ ಎಂಬುವವರ ಪುತ್ರಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಲಕ್ಷ್ಮಿ ಕೊಲೆಯಾದಳು. ಆಕೆ ಇತ್ತೀಚಿಗಷ್ಟೆ ಬೆಂಗಳೂರಿನ ಆಕೆಯ ದೊಡ್ಡಪ್ಪನ ಗುಡಿಸಲು ಸೇರಿಕೊಂಡಿದ್ದಳು. ಎಚ್.ಎಂ.ಟಿ.ಶಾಲೆಯಲ್ಲಿ ಆಕೆಯನ್ನು ಸೇರಿಸಲಾಗಿತ್ತು.

ಶಾಲೆ ಆರಂಭವಾಗುತ್ತಿದ್ದದ್ದು ಬೆಳಿಗ್ಗೆ ಏಳುವರೆ ಗಂಟೆಗೆ. ಹಾಗಾಗಿ ಆಕೆ ಆರೂವರೆಗೆ ಎದ್ದು ಬಹಿರ್ದೆಸೆಗೆ ಹೊರಟಿದ್ದಳು. ಮನೆಯೊಳಗೆ ವ್ಯವಸ್ಥೆ ಇಲ್ಲದ್ದರಿಂದ ಆಕೆಗೂ, ಆಕೆಯ ಮನೆಯವರಿಗೂ ಹೊರಗಿನ ಬಯಲೇ ಬಹಿರ್ದೆಸೆಯ ತಾಣ.

ಲಕ್ಷ್ಮಿ ವಾಸಿಸುತ್ತಿದ್ದ ಜೋಪಡಿಯ ಸಮೀಪವೇ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಂಥ ಅಪಾರ್ಟ್‌ಮೆಂಟ್‌ಗಳ ಕಾರ್ಪೆಂಟರಿ ಕೆಲಸ, ಟೈಲ್ಸ್ ಜೋಡಿಸುವ ಕೆಲಸಗಳಿಗೆ ಬಿಲ್ಡರ್‌ಗಳು ಬಿಹಾರದ ಜನರನ್ನು ಕರೆಸುತ್ತಾರೆ. ಈ ಭಾಗದಲ್ಲೂ ಸಾವಿರಾರು ಬಿಹಾರಿ ಕೂಲಿಕಾರ್ಮಿಕರಿದ್ದಾರೆ.
ಲಕ್ಷ್ಮಿ ದಿನವೂ ಬಹಿರ್ದೆಸೆಗೆ ಬಯಲಿಗೆ ಹೋಗುವುದನ್ನು ಕೆಲ ದುರುಳರು ನೋಡಿಕೊಂಡಿದ್ದಾರೆ. ಸೋಮವಾರ ಆಕೆ ಅಲ್ಲಿ ಪೊದೆಯ ಬಳಿಗೆ ಹೋದಾಗ ಸಾಮೂಹಿಕ ಅತ್ಯಾಚಾರ ನಡೆದಿದೆ. ಸಹಾಯಕ್ಕೆ ಮೊರೆಯಿಡಲು ಆಕೆ ಕೂಗಿಕೊಂಡಾಗ ಬಾಯಿಯೊಳಗೆ ಹುಲ್ಲು ತುಂಬಿ ಆಕೆಯ ಧ್ವನಿಯನ್ನು ಅಡಗಿಸಲಾಗಿದೆ. ಅಷ್ಟಕ್ಕೆ ಬಿಡದೆ ಆಕೆಯ ಕತ್ತು ಹಿಸುಕಿ ಅಲ್ಲೇ ಕೊಂದುಹಾಕಲಾಗಿದೆ.

ಎಷ್ಟು ಹೊತ್ತಾದರೂ ಲಕ್ಷ್ಮಿ ಹಿಂದಿರುಗಿ ಬಾರದೇ ಇದ್ದಾಗ ಮನೆಯವರು ಹುಡುಕಲು ತೊಡಗಿದಾಗ ಕಂಡದ್ದು ಹೃದಯವಿದ್ರಾವಕ ದೃಶ್ಯ. ನಂತರ ಪೊಲೀಸರು ಬಂದು ಮಹಜರು ಮಾಡಿ ತನಿಖೆ ಆರಂಭಿಸಿದ್ದಾರೆ.

ಉತ್ತರಪ್ರದೇಶದ ನೋಯ್ಡಾದಲ್ಲಿ ಅರುಷಿ ಎಂಬ ಬಾಲಕಿಯ ಕೊಲೆಯೂ ಹೀಗೇ ಆಗಿತ್ತಲ್ಲವೇ? ಆಕೆಯೂ ಹೆಚ್ಚುಕಡಿಮೆ ಲಕ್ಷ್ಮಿಯ ವಯಸ್ಸಿನವಳೇ. ಅರುಷಿ ಮೇಲೆ ಅತ್ಯಾಚಾರ ಪ್ರಯತ್ನ ನಡೆಯಿತು, ಆದರೆ ಲಕ್ಷ್ಮಿ ಅತ್ಯಾಚಾರಕ್ಕೆ ಒಳಗಾದಳು. ಇಬ್ಬರೂ ಕೊಲೆಯಾದರು. ಇಬ್ಬರೂ ಭಾರತೀಯ ಹೆಣ್ಣುಮಕ್ಕಳು. ಇಬ್ಬರೂ ರಕ್ತಮಾಂಸ ಇದ್ದವರೇ.

ಆದರೆ ವಿಚಿತ್ರವೆಂದರೆ ಅರುಷಿಗೆ ನ್ಯಾಯ ಕೊಡಿಸಲು ತಿಂಗಳುಗಟ್ಟಲೆ ಹೆಣಗಾಡಿದ ಇಂಗ್ಲಿಷ್, ಹಿಂದಿ ಎಲೆಕ್ಟ್ರಾನಿಕ್ ಮಾಧ್ಯಮಗಳೆಲ್ಲ ಎಲ್ಲಿ ಹೋದವು? ೨೪ ಗಂಟೆ ಸುದ್ದಿ ಕುಟ್ಟುತ್ತಿದ್ದ ನ್ಯೂಸ್ ಚಾನೆಲ್‌ಗಳ ವರದಿಗಾರರೆಲ್ಲ ಏನಾಗಿ ಹೋದರು? ಯಾಕೆ ಲಕ್ಷ್ಮಿ ಪ್ರಕರಣ ಸುದ್ದಿ ಮಾಡುತ್ತಿಲ್ಲ? ಆಕೆಗೆ ನ್ಯಾಯ ಕೊಡಿಸಲು ಯಾರೂ ಯಾಕೆ ಮುಂದೆ ಬರುತ್ತಿಲ್ಲ? ಲಕ್ಷ್ಮಿ ಎಂಬ ೧೩ ವರ್ಷದ ಹೆಣ್ಣುಮಗಳನ್ನು ಬರ್ಬರವಾಗಿ ಅತ್ಯಾಚಾರವೆಸಗಿ ಕೊಲೆಗೈಯಲಾಯಿತು ಎಂಬ ಸಣ್ಣಸುದ್ದಿಯೂ ಹಿಂದಿ-ಇಂಗ್ಲಿಷ್ ಮಾಧ್ಯಮಗಳಲ್ಲಿ ಪ್ರಸಾರವಾಗಲಿಲ್ಲವೇಕೆ?

ಲಕ್ಷ್ಮಿ ಕೂಲಿ ಮಾಡುವ ಕುಟುಂಬ ಹುಡುಗಿ. ಆಕೆಯ ತಂದೆ ಡಾಕ್ಟರ್ ಅಥವಾ ಸಾಫ್ಟ್‌ವೇರ್ ಇಂಜಿನಿಯರ್ ಅಲ್ಲ. ನೆನಪಿಸಿಕೊಳ್ಳಿ, ಈ ಮೀಡಿಯಾಗಳು ಬೆನ್ನು ಹತ್ತಿದ ಕೊಲೆಕೇಸುಗಳಲ್ಲಿ ಸತ್ತವರು ಅಥವಾ ಸಾಯಿಸಿದವರು ಇಂಥ ಶ್ರೀಮಂತ ಹಿನ್ನೆಲೆಯವರೇ ಆಗಿದ್ದಾರೆ. ಹಿಂದೆ ಬೆಂಗಳೂರಿನ ಕಾಲ್‌ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಭಾ ಎಂಬಾಕೆ ಕೊಲೆಯಾದಾಗ ಇದೇ ಮೀಡಿಯಾಗಳು ಅಬ್ಬರದ ಸುದ್ದಿಗಳನ್ನು ಮಾಡಿದ್ದವು. ಯಾಕೆಂದರೆ ಆಕೆ ಕಾರ್ಪೊರೇಟ್ ರಂಗದೊಂದಿಗೆ ನೇರ ಸಂಬಂಧವಿದ್ದಾಕೆ. ಜೆಸ್ಸಿಕಾಲಾಲ್ ಮಾಡೆಲ್ ಆಗಿದ್ದರಿಂದ, ನಿತಿಶ್ ಕಟಾರಾ ಕೊಂದವರು ರಾಜಕಾರಣಿಗಳಾಗಿದ್ದರಿಂದ ಇವೆಲ್ಲವೂ ಭರ್ಜರಿ ಸುದ್ದಿಗಳಾದವು. ಪ್ರಿಯದರ್ಶಿನಿ ಮಟ್ಟೂ ಪ್ರಕರಣವೂ ಇದಕ್ಕೆ ಹೊರತೇನಲ್ಲ.

ಬಡಪಾಯಿ ಲಕ್ಷ್ಮಿಗೆ ಯಾವ ಹಿನ್ನೆಲೆಯೂ ಇಲ್ಲ. ಆಕೆಯ ಅಪ್ಪ ಹೊಸಕೋಟೆಯ ಕೋಳಿಫಾರಂ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಾರೆ. ದೊಡ್ಡಪ್ಪನೂ ಕೂಲಿ ಕೆಲಸವನ್ನೇ ಮಾಡುತ್ತಿದ್ದರು. ಇಂಥವರ ಕೊಲೆ ಸುದ್ದಿ ಪ್ರಸಾರ ಮಾಡಿದರೆ ಯಾವ ಚಾನೆಲ್‌ನ ಟಿಆರ್‌ಪಿ ಹೆಚ್ಚಾಗುವುದಿಲ್ಲ. ಹೀಗಾಗಿ ಸತ್ತವರು ಒಂದೇ ವಯಸ್ಸಿನ ಹೆಣ್ಣುಮಕ್ಕಳಾದರೂ ಯಾವ ಕೊಲೆಯಿಂದ ಲಾಭವೋ ಆ ಕೊಲೆಯ ಸುದ್ದಿಯಷ್ಟೆ ಪ್ರಸಾರವಾಗುತ್ತದೆ. ಲಾಭವಿಲ್ಲದ ಕೊಲೆಯ ಸುದ್ದಿ ಸತ್ತುಹೋಗುತ್ತದೆ.

ಬಿಹಾರಿಗಳಿಗೆ ಬುದ್ಧಿ ಕಲಿಸುವವರು ‍ಯಾರು?
ಲಕ್ಷ್ಮಿ ಅತ್ಯಾಚಾರ-ಕೊಲೆಯಲ್ಲಿ ಬಿಹಾರಿಗಳೇ ಪಾಲ್ಗೊಂಡಿದ್ದಾರೆ ಎಂಬುದು ಈಗಾಗಲೇ ಚಾಲ್ತಿಯಲ್ಲಿರುವ ಸುದ್ದಿ. ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ ಕಟ್ಟಡ ನಿರ್ಮಾಣ ಕೆಲಸ ಮಾಡುವ ಸುಮಾರು ೨೦೦ಕ್ಕೂ ಹೆಚ್ಚು ಬಿಹಾರಿ ಯುವಕರನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆಯಂತೆ. ಆದರೂ ಕೊಲೆಗಡುಕರು ಸಿಕ್ಕಿಲ್ಲ.

ಬಿಹಾರಿಗಳ ಈ ಬಗ್ಗೆಯ ವರ್ತನೆ ಹೊಸದೇನೂ ಅಲ್ಲ. ಅವರು ಪದೇ ಪದೇ ಗುಲ್ಬರ್ಗದಿಂದ ವಲಸೆ ಬಂದಿರುವ ಕನ್ನಡಿಗ ಕಾರ್ಮಿಕರ ಜತೆ ಜಗಳಕ್ಕೆ ಬೀಳುತ್ತಾರೆ. ಹೀಗೆ ಜಗಳ ನಡೆದಾಗ ಅವರ ನಿಜವಾದ ಟಾರ್ಗೆಟ್ ಹೆಣ್ಣುಮಕ್ಕಳೇ ಆಗಿರುತ್ತಾರೆ.

ಕೆಲ ತಿಂಗಳುಗಳ ಹಿಂದೆ ಮಾರತ್‌ಹಳ್ಳಿ ರಸ್ತೆಯ ಕುಂದನಹಳ್ಳಿ ಗೇಟ್ ಸಮೀಪ ತೂಪನಹಳ್ಳಿ ಕಾಲೋನಿಯಲ್ಲಿ ಒಂದು ಪ್ರಕರಣ ನಡೆದಿತ್ತು. ಬಿಹಾರಿ ಗೂಂಡಾಗಳು ರಾತ್ರಿ ಗುಲ್ಬರ್ಗ ಮೂಲದ ಕನ್ನಡಿಗರು ವಾಸಿಸುವ ಪ್ರದೇಶದ ಮೇಲೆ ದಾಳಿ ನಡೆಸಿ, ಗಂಡಸರನ್ನು ಹಿಡಿದು ಹೊಡೆದು, ಹೆಂಗಸರ ಸೀರೆ, ಬಟ್ಟೆಗಳನ್ನು ಎಳೆದಾಡಿದ್ದರು. ಓರ್ವ ಹೆಣ್ಣುಮಗಳ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಪಡುಕೋಟಿ ನೇತೃತ್ವದಲ್ಲಿ ಒಂದು ಬೃಹತ್ ಹೋರಾಟವೂ ನಡೆದಿತ್ತು. ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯೂ ದಾಖಲಾಗಿತ್ತು.

ಈಗ ಇದೆಲ್ಲವೂ ಯಾಕೋ ಮಿತಿಮೀರುತ್ತಿರುವ ಹಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುತ್ತಿರುವವರು ಬಿಹಾರ, ಉತ್ತರಪ್ರದೇಶ ಕಡೆಯಿಂದ ವಲಸೆ ಬಂದವರು. ನಾರ್ಥಿಗಳ ಈ ಬಗೆಯ ಉಪಟಳಗಳಿಂದಲೇ ಬಹುಶಃ ರಾಜ್ ಠಾಕ್ರೆ ಮಹಾರಾಷ್ಟ್ರದಲ್ಲಿ ಇವರ ವಿರುದ್ಧ ಸಮರ ಸಾರಿದ್ದಾರೆ ಎನಿಸುತ್ತದೆ.

ದುರಂತವೆಂದರೆ ಲಕ್ಷ್ಮಿ ಪ್ರಕರಣದಲ್ಲಿ ಆಕೆಯ ಪರವಾಗಿ ಧ್ವನಿಯೆತ್ತುವವರೇ ಯಾರೂ ಇಲ್ಲದಂತಾಗಿದೆ. ಆಕೆಯ ಸಾವು ಯಾರನ್ನೂ ಭಾದಿಸಿಲ್ಲವೇಕೆ ಎಂಬುದೇ ಆಶ್ಚರ್ಯ.

ಬೆಂಗಳೂರಿನ ವಿಚಿತ್ರವೆಂದರೆ ಹೊರರಾಜ್ಯಗಳಿಂದ, ದೇಶಗಳಿಂದ ಇಲ್ಲಿಗೆ ವಲಸೆ ಬಂದವರಿಗೆ ಇಲ್ಲಿ ಬಗೆಯ ರಕ್ಷಣೆ ದೊರೆಯುತ್ತದೆ. ಆದರೆ ನಮ್ಮದೇ ರಾಜ್ಯದ ಮೂಲೆಮೂಲೆಯಿಂದ ಬದುಕು ಅರಸಿ ರಾಜಧಾನಿಗೆ ಬಂದವರ ಕಷ್ಟ ಕೇಳುವವರು, ಹೇಳುವವರು ಯಾರೂ ಇಲ್ಲ.
ಇದೆಂಥ ವ್ಯಂಗ್ಯ?

ಬಿಹಾರಿಗಳೇ, ನೆಟ್ಟಗೆ ಬದುಕುವುದಾದರೆ ಇಲ್ಲಿರಿ, ಇಲ್ಲದಿದ್ದರೆ ಅಂಡಿನ ಮೇಲೆ ಒದ್ದು ಇಲ್ಲಿಂದ ಓಡಿಸುತ್ತೇವೆ ಎಂದು ಯಾರೂ ಯಾಕೆ ಹೇಳುತ್ತಿಲ್ಲ?

2 comments:

Anonymous said...

hi dinesh,
it is nice that you reacted with a long article to my comment. so far I have not met you. But i find you are an interesting chap.
day before yesterday i saw Indu Sanje edition. It carried wrtiers' study tour to areas where mining is rampant as the lead. though the paper missed the bomb blast story, I was lured by your prominence to the issue of iron ore mining. However, even that issue did not receive due coverage in other media.
- shile

Anonymous said...

Somye

Neevu bareyo reeti nodidre Bihaari galu illi baro modalu inthahaa ghatanegalu bengaloorinalli nadede illaveno annuva haagide. Madhyamagala bagge baredaddu sari. Adaralli hosatenilla. Avu yaavattoo haageye iddavu. Ee kuritu prajnavantha lekhakarella aagaaga bareyuttaloo iddaare. Aadare, neevu bareyuttaa bareyuttaa ghataneyannu kannaare kandavaranthe Bihaarigale idannu maadiddaare andiddeeri. Haagadare, polisaru, court galu ella yaake. Inyaaro aagiddare polisaru duddu tagondu, prabhaavakke hedari summaniddaru annona. Badapaayi biharigalannu kallina manchakke katti kalina adige laathiyalli hodedeyudakke polisarenoo anjuvaralla. Nimmanthe yochisuva polise si/ci galindaagi eshut bada bihaarigalu etu tindaro eno. Ondu vele yaavano obba bihaari maadida antale tilkollona. Haagendu bihaarigalellaa criminal galennuva nimma dhaati yaako ishtavaagilla. Kelavomme neevu enannu khandisuttiro adanne neevu maadutteeri annisuttade. Onthara KRV pudi rowdygala dhaatiyalle neevu nadakondre hege? Nimma lekhana odi swalpa besara aayitu. Bihaaradavaraagalee, Gulbarga davaraagalee, hotte paadige innonduu raajyakke hendati makkalannu kattikondu bandu paadu paduttiruva ellarannoo criminal galu antha bhaavisuvudu tappu...nimage tilidirali ghattada kelage andare dk/uk/malenaadu/kasaragodu/kodagu pradeshagalalli jana Gulbarga, Bijapura dinda baruva kooligala bagge koodaa ide abhipraaya hondiddaare. Ellaadaroo sanna putta kallatana aadare nimmantha aadarshavaadi SI galu modalu badiyuvudu badapaayi kooli kaarmikarige. Avaralli yaavano yaavatto obba aparada maadidarantoo mugiyitu...allige avarella shaashwata criminal tribe galaagi biduttaare...