Monday, April 6, 2009

ದೇಸೀಮಾತು ಬಿಡುಗಡೆ

ಕಡೆಗೂ ದೇಸೀಮಾತು ಕೃತಿ ಬಿಡುಗಡೆಯಾಗಿದೆ. ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ನನ್ನದೂ ಸೇರಿ ಒಟ್ಟು ಐವರು ಪತ್ರಕರ್ತರ ಪುಸ್ತಕಗಳು ಬಿಡುಗಡೆಯಾದವು.
ಅರ್ಜುನ ದೇವ ಅವರ ``ಸ್ಕೂಪು ತೋಪಾಯಿತು'', ಲಕ್ಷ್ಮಣ ಕೊಡಸೆಯವರ ``ಅಜಲು'', ಗುಡಿಹಳ್ಳಿ ನಾಗರಾಜು ಅವರ ``ರಂಗಸೆಲೆ'', ಪುಟ್ಟಸೋಮಾರಾಧ್ಯ ಅವರ ``ಅಕ್ಕ-ಮೀರಾ'' ಲೋಕಾರ್ಪಣೆಗೊಂಡ ಇನ್ನಿತರ ಕೃತಿಗಳು.
ಕಾರ್ಯಕ್ರಮದಲ್ಲಿ ಲೇಖಕರಲ್ಲದೆ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಚಲನಚಿತ್ರ ನಟ ಶಿವರಾಜ ಕುಮಾರ್, ಸಾಹಿತಿ ಹರಿಹರಪ್ರಿಯ, ಪ್ರೆಸ್ ಕ್ಲಬ್ ಅಧ್ಯಕ್ಷ ಇ.ವಿ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಉಪಾಧ್ಯಕ್ಷ ಕೃಷ್ಣಪ್ಪ, ಖಜಾಂಚಿ ಕೆ.ಎಸ್.ಸೋಮಶೇಖರ್, ಗ್ರಂಥಾಲಯ ಇಲಾಖೆ ನಿರ್ದೇಶಕ ಶಿವಾನಂದ ಬಿ.ಹೊಂಡದಕೇರಿ ಮತ್ತಿತರರು ಪಾಲ್ಗೊಂಡಿದ್ದರು.

No comments: