Tuesday, February 24, 2009

ಹುಸಿ ರಾಷ್ಟ್ರಭಕ್ತರಿಗೆ ಉತ್ತರ ಸಿಕ್ಕಿದೆಯೇ?

ಒಂದು ಚೆಂದನೆಯ ಕತೆ, ಅಷ್ಟೇ ಚೆಂದನೆಯ ಚಿತ್ರಕತೆ, ಮನಮುಟ್ಟವಂಥ ನಿರೂಪಣೆ, ಪಾತ್ರಗಳಿಗೆ ಜೀವ ತುಂಬುವಂಥ ಕಲಾವಿದರು, ಹಿತಾನುಭವ ನೀಡುವ ಸಂಗೀತ, ಎಲ್ಲವನ್ನೂ ಹದವಾಗಿ ಬೆರಸಿ, ಬೇಯಿಸಿ `ಪಾಕ'ಗೊಳಿಸಿದ ತಂತ್ರಜ್ಞರು...

ಇದು ಡ್ಯಾನಿ ಬಾಂi ನಿರ್ದೇಶನದ `ಸ್ಲಂಡಾಗ್ ಮಿಲಿಯನೇರ್' ಸಿನಿಮಾದ ಹಿನ್ನೆಲೆ. ಆದರೆ `ರಾಷ್ಟ್ರಭಕ್ತರು' ವಿವಾದ ಸೃಷ್ಟಿಸಿದರು. ಭಾರತದ ಬಡತನವನ್ನು ಹೀಯಾಳಿಸಲಾಗುತ್ತಿದೆ ಎಂದು ಆರೋಪಿಸಿದರು. ನಮ್ಮ ದಾರಿದ್ರ್ಯವನ್ನು ವೈಭವೀಕರಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಹಪಹಪಿಸಿದರು.

ಅವರ ಉದ್ದೇಶಗಳು ಸ್ಪಷ್ಟ: ಕೊಳಗೇರಿಯ ಬಾಲಕನೊಬ್ಬ ಮುಖ್ಯವಾಹಿನಿಗೆ ಬರುವುದು `ಉನ್ನತ ವರ್ಗದ' ಜನಕ್ಕೆ ಅರಗದ ವಿಚಾರ. ಅದೂ ಕೊಳಗೇರಿಯಲ್ಲಿ ಹುಟ್ಟಿದ ಸಾಮಾನ್ಯ ಪೋರನೊಬ್ಬ ಬುದ್ಧಿವಂತ ಆಗುತ್ತಾನೆ ಎಂದರೆ ಅದು ಶತಶತಮಾನಗಳಿಂದ ವಿದ್ಯೆ ಕಲಿತವರಿಗೆ ಸಹಿಸಲಾಗದ ಸಂಗತಿ. ಕೊಳಗೇರಿಯಲ್ಲಿ ಹುಟ್ಟಿ ಕೊಳಕನ್ನೇ ಮೈವೆತ್ತಿ ಮೇಲೆದ್ದವನೊಬ್ಬ `ಮಡಿವಂತ'ರಾದ ತಮ್ಮೊಂದಿಗೆ ಸ್ಪರ್ಧಿಸುತ್ತಾನೆ ಎಂದರೆ ಸಹ್ಯವಾಗುವುದಾದರೂ ಹೇಗೆ?
ಅದಕ್ಕೆ ರಾಷ್ಟ್ರಭಕ್ತಿಯ ಸೋಗಿನಲ್ಲಿ ಸ್ಲೋಗನ್ ಹೊರಡಿಸಿದರು. ಇದು ಸ್ಲಂಡಾಗ್‌ಗೆ ದೇಶವಿರೋಧಿ ಎನ್ನುವ ಪಟ್ಟಕಟ್ಟಿದರು.

ಇಷ್ಟಕ್ಕೆ ಮುಗಿಯಲಿಲ್ಲ ಇವರ ಆತ್ಮವಂಚನೆ. ಸ್ಲಂಡಾಗ್ ಮಿಲಿಯನೇರ್ ಸಂಗೀತ ನಿರ್ದೇಶನಕ್ಕೆ `ಗೋಲ್ಡನ್ ಗ್ಲೋಬ್' ಪ್ರಶಸ್ತಿ ಬಂದಾಗ ಎ.ಆರ್. ರೆಹಮಾನ್ ಮೇಲೂ ಹರಿಹಾಯ್ದರು.

ಜನವರಿ ೨೩ರಂದು `ಪ್ರಜಾವಾಣಿ' ಪತ್ರಿಕೆಯ `ಸಿನಿಮಾ ರಂಜನೆ' ಪುರವಣಿಯಲ್ಲಿ ಗಂಗಾಧರ ಮೊದಲಿಯಾರ್ ತಮ್ಮ `ಫಿಲಂ ಡೈರಿ' ಅಂಕಣದಲ್ಲಿ `ಎ.ಆರ್. ರೆಹಮಾನ್ ಅವರ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ವಿದೇಶದಲ್ಲಿ ತಮ್ಮ ಪ್ರದರ್ಶಿಸುವುದು ರೆಹಮಾನ್ ಅವರಿಗೆ ಇದು ಹೊಸದೇನಲ್ಲ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಏನು ಎಂಬುದೇ ತಮಗೆ ಮುಖ್ಯವಾಗುತ್ತದೆ' ಎಂದು ಕಾರಿಕೊಂಡರು.

ಭಾರತೀಯ ಚಿತ್ರರಂಗಕ್ಕೆ ಎ.ಆರ್. ರೆಹಮಾನ್ ಅವರ ಕೊಡುಗೆ ಏನು ಎನ್ನುವುದು ಯಾವತ್ತೋ ಸಾಬೀತಾಗಿದೆ. ರೆಹಮಾನ್ ತಮ್ಮ ಚೊಚ್ಚಲ ಸಿನಿಮಾ `ರೋಜಾ'ದಿಂದಲೇ ತಮ್ಮ ಕಸುವು ತೋರಿದ್ದಾರೆ. `ಕೆಲವರಿಗೆ' `ಕೆಲವರು' ಮಾಡಿದರೆ ಮಾತ್ರ ಸಾಧನೆ. ಉಳಿದವರ ಸಾಧನೆ ನಗಣ್ಯ. ಇದೇ ರೆಹಮಾನ್ `ವಂದೇಮಾತರಂ' ಗೀತೆಗೆ ಸಂಗೀತ ಸಂಯೋಜಿಸಿದಾಗಲೂ ಅವರ ವಿರುದ್ಧ ಹುನ್ನಾರ ನಡೆಸಲಾಗಿತ್ತು. ರೆಹಮಾನ್ ಉತರಿಸಲಿಲ್ಲ. ಮೊನ್ನೆ ಮೊನ್ನೆ ಮತ್ತೆ ಮೂದಲಿಸಿದಾಗಲೂ ಉತ್ತರಿಸಲಿಲ್ಲ. ಈಗಲೂ ಉತ್ತರಿಸಿಲ್ಲ.

ಆದರೆ ಉತ್ತರ ಸಿಕ್ಕಿದೆ. ಆದರೂ ಗಂಗಾಧರ ಮೊದಲಿಯಾರ್ನಂಥ `ಬುದ್ಧಿವಂತರು', ಹುಸಿ ರಾಷ್ಟ್ರಭಕ್ತರು, `ಇದು ಬಾಲಿವುಡ್ ಮೇಲೆ ನಿಯಂತ್ರಣ ಸಾಧಿಸಲು ಪಾಶ್ಚಾತ್ಯರು ಹೂಡಿದ ತಂತ್ರವೇ' ಎಂದು ಹುಳುಕು ಹುಡುಕುವ ಕನ್ನಡಪ್ರಭದ (ಫೆ. ೨೪, ೭ನೇ ಪುಟ) ಮಂದಿ ಯಾವತ್ತಿಗೂ ಅಂಥ ಸೂಕ್ತವಾದ ಉತ್ತರಗಳನ್ನು ಹುಡುಕಿಕೊಳ್ಳುವುದಿಲ್ಲ. ಅದು ಅವರಿಂದ ಸಾಧ್ಯವೂ ಇಲ್ಲ. ಹಾಗೆ ತೆರೆದುಕೊಳ್ಳಲು ಆರೋಗ್ಯಕರ ಮನಸ್ಸು ಬೇಕು! ರೆಹಮಾನ್ ಹೇಳಿದಂತೆ ಪ್ರೀತಿ, `ಆಯ್ಕೆ' ಆಗಬೇಕು!

(ಸ್ಲಂ ಡಾಗ್ ಸಿನಿಮಾ ಆಸ್ಕರ್ ಗೆದ್ದ ಹಿನ್ನೆಲೆಯಲ್ಲಿ ಗೆಳಯರೊಬ್ಬರು ಕಳಿಸಿದ ಮೇಲ್)

2 comments:

Anonymous said...

ರೋಗಗ್ರಸ್ಥ ಮನಸಿನ ಲೇಖನ.

- Praveen

ಹೊರಗಣವನು said...

husi bhaktara bagge, sogaladigala bagge chennagide. prala(ta)pigala baggyu bareyabekittu.