tag:blogger.com,1999:blog-5706152753465599900.post1151075736115613408..comments2024-01-23T22:55:09.981+05:30Comments on ದೇಸೀಮಾತು: ರಾಮಚಂದ್ರಗೌಡರ ‘ಬ್ರಾಹ್ಮಿನ್ ಫೋಬಿಯಾ’ದಿನೇಶ್ ಕುಮಾರ್ ಎಸ್.ಸಿ.http://www.blogger.com/profile/13353280392827060909noreply@blogger.comBlogger8125tag:blogger.com,1999:blog-5706152753465599900.post-10529041311225530982009-01-06T20:57:00.000+05:302009-01-06T20:57:00.000+05:30ದೇಸೀಮಾತು ಒಂದು ವಿಚಾರಪರ ವಿಷಯವನ್ನೆತ್ತಿಕೊಂಡು ಬಹು ಚೆನ್ನ...ದೇಸೀಮಾತು ಒಂದು ವಿಚಾರಪರ ವಿಷಯವನ್ನೆತ್ತಿಕೊಂಡು ಬಹು ಚೆನ್ನಾಗಿ ವಿಶ್ಲೇಷಿಸಿದೆ. ಅಲ್ಲಾ ಸ್ವಾಮಿ, ಸಂವಿಧಾನವನ್ನು ಗೌರವಿಸುತ್ತೇನೆ ಎಂದು ಪ್ರಮಾಣ ಮಾಡಿ ಅಧಿಕಾರಗ್ರಹಣ ಮಾಡಿದ ರಾಮಚಂದ್ರೇಗೌಡರು ಈ ರೀತಿಯಾಗಿ ಓಲೈಕೆಯ ಮಾತುಗಳನ್ನಾಡಬಾರದಿತ್ತು. ಅವರು ಅವಿದ್ಯಾವಂತರೇನಲ್ಲ, ಹಾಗಾಗಿ ಯಾವುದೋ ವೇದಿಕೆಯಲ್ಲಿ ಕೆಲವರನ್ನಷ್ಟೇ ತೃಪ್ತಿಪಡಿಸಲು ಅವರಾಡಿದ ಮಾತು ಅವರ ಬಗ್ಗೆ ಮಾತ್ರವಲ್ಲ ಅವರ ಸರ್ಕಾರದ ಬಗ್ಗೆಯೂ ಹೇಸಿಗೆ ಮೂಡಿಸುತ್ತದೆ. ಎಂಥೆಂಥ ನಾಯಕರು ಆಳಿದ ಕನ್ನಡ ನಾಡಿನಲ್ಲಿ ಎಂಥ ನಸುಗುನ್ನಿ ನಾಯಕರು ಅವತರಿಸಿದ್ದಾರಲ್ಲಾ ಎಂಬ ಖೇದವೂ ನಮ್ಮ ಮನದಲ್ಲಿ ಮೂಡುತ್ತದೆ. <BR/>ಕರ್ನಾಟಕ ವಿಧಾನಸಭೆಯ ಸ್ಪೀಕರ್ ಅವರು ಈ ಕೂಡಲೇ ಆ ಭಾಷಣದ ಪ್ರತಿಯನ್ನು ತರಿಸಿಕೊಂಡು ಆ ಶಾಸಕರಿಗೆ ಛೀಮಾರಿ ಹಾಕಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು.cmariejoseph.blogspot.comhttps://www.blogger.com/profile/08160701498866207563noreply@blogger.comtag:blogger.com,1999:blog-5706152753465599900.post-54989573711195564042008-12-29T17:02:00.000+05:302008-12-29T17:02:00.000+05:30ಪ್ರಿಯ ಶ್ರೀಕಾಂತ್,ತುಂಬ ಭಾವುಕರಾಗಿ ಪ್ರತಿಕ್ರಿಯಿಸಿದ್ದೀರಿ...ಪ್ರಿಯ ಶ್ರೀಕಾಂತ್,<BR/>ತುಂಬ ಭಾವುಕರಾಗಿ ಪ್ರತಿಕ್ರಿಯಿಸಿದ್ದೀರಿ ಅನಿಸುತ್ತದೆ. ದಲಿತ, ಹಿಂದುಳಿದ ಶಬ್ದಗಳು ಜಾತಿಯನ್ನು ಸೂಚಿಸುವುದಿಲ್ಲ, ವರ್ಗವನ್ನು ಸೂಚಿಸುತ್ತವೆ. ಇಂಥ ಸಣ್ಣಪುಟ್ಟ ವಿಷಯಗಳನ್ನಾದರೂ ಅಧ್ಯಯನ ಮಾಡಿ ನಿಮ್ಮ ಅಭಿಪ್ರಾಯ ಹೇಳಿದ್ದರೆ ಚೆನ್ನಾಗಿರುತ್ತಿತ್ತು. ಅಷ್ಟಕ್ಕೂ ಪಕ್ಷಗಳು ಜಾತಿಯ ಹಣೆಪಟ್ಟಿ ಅಂಟಿಸಿಕೊಳ್ಳುವ ಕುರಿತು ನಾನು ಬರೆದಿಲ್ಲ. ರಾಮಚಂದ್ರಗೌಡರ ‘ಬ್ರಾಹ್ಮಣ ಸರ್ಕಾರ ಎಂಬ ಪ್ರಯೋಗದ ಕುರಿತು ನಾನು ಪರಿಶೀಲಿಸಿದ್ದೇನೆ.<BR/>ಮಾಯಾವತಿ ಸರ್ಕಾರ ಬಂದಾಗ ನಾನು ಹುಟ್ಟಿದ್ದೆ ಹಾಗು ಬುದ್ಧಿಯೂ ಬೆಳೆದಿತ್ತು. ಆಗ ನಾನು ಏನನ್ನು ಬರೆದಿದ್ದೆ ಎಂಬ ಕುತೂಹಲವಿದ್ದರೆ ಬಿಡುವಾದಾಗ ಬನ್ನಿ, ಹಳೆಯ ಲೇಖನಗಳ ಕಟಿಂಗ್ಸ್ ತೋರಿಸುವೆ. <BR/>ಒಂದು ನಿರ್ದಿಷ್ಟ ಜಾತಿಯ ಮಾರ್ಗದರ್ಶನವನ್ನು ರಾಮಚಂದ್ರಗೌಡರು ಬಯಸುತ್ತಿದ್ದಾರೆ ಎಂದಾದರೆ ಉಳಿದವರ ಮಾರ್ಗದರ್ಶನವನ್ನು ನಿರಾಕರಿಸುತ್ತಿದ್ದಾರೆ ಎಂದೇ ಅರ್ಥ. ಜಾತಿಯ ಆಧಾರದಲ್ಲಿ ಸರ್ಕಾರಗಳು ಮಾರ್ಗದರ್ಶನ ಪಡೆಯುವುದೇ ನೀಚತನ. ಸರ್ಕಾರಕ್ಕೆ ಕಟ್ಟಕಡೆಯ ಮನುಷ್ಯನವರೆಗೆ ಎಲ್ಲರೂ ಮಾರ್ಗದರ್ಶನ ನೀಡುವಂತಾಗುವುದೇ ನಿಜವಾದ ಪ್ರಜಾಪ್ರಭುತ್ವ. ಇದು ರಾಮಚಂದ್ರಗೌಡರಂಥವರಿಗೆ, ನಿಮ್ಮಂಥವರಿಗೆ ಅರ್ಥವಾಗದಿದ್ದರೆ ಯಾರೇನು ಮಾಡಲು ಸಾಧ್ಯ ಹೇಳಿ.<BR/>ಮನುಷ್ಯ ಮನುಷ್ಯನನ್ನು ಹಿಂಸಿಸುವುದು ತಪ್ಪು, ಕೊಲ್ಲುವುದು ತಪ್ಪು. ನಾನು ಅದನ್ನು ಸರಿ ಎಂದು ನನ್ನ ಲೇಖನದಲ್ಲಿ ಹೇಳಿಲ್ಲ. ಆದರೆ ಯಾಕೆ ಈ ದೇಶದಲ್ಲಿ ಪ್ರತಿನಿತ್ಯ ಜಾತಿಯ ಕಾರಣಕ್ಕೆ ದಲಿತರ ಕೊಲೆ, ಅತ್ಯಾಚಾರ ನಡೆಯುತ್ತಲೇ ಬಂದಿದೆ? ಈ ಬಗ್ಗೆ ಎಂದಾದರೂ ಗಂಭೀರವಾಗಿ ಯೋಚಿಸಿದ್ದೀರಾ? ಬ್ರಾಹ್ಮಣನನ್ನು ಹಿಂಸಿಸುವುದು ತಪ್ಪು, ದಲಿತನನ್ನು ಹಿಂಸಿಸುವುದು ಸರಿ ಎಂಬ ಮನಸ್ಥಿತಿ ಸರಿಯೇ? ಇದನ್ನು ಫೋಬಿಯಾ ಅನ್ನದೆ ಇನ್ನೇನನ್ನುವುದು? ದಲಿತರ ಮೇಲೆ ಹಿಂಸಾ ಪ್ರಯೋಗ ಆಗುತ್ತಿದೆ ಎಂಬ ಕಾರಣಕ್ಕೆ ಬ್ರಾಹ್ಮಣರ ಮೇಲೂ ಆಗಬೇಕು ಎಂದೇನು ನಾನು ಸೂಚಿಸುತ್ತಿಲ್ಲ. ಆದರೆ ಹಿಂಸೆಗೆ ಜಾತಿಯ ಮುಖವೂ ಇರುತ್ತದೆ ಎಂಬುದನ್ನು ಗುರುತಿಸಬೇಕು ಎಂದಷ್ಟೇ ಹೇಳುತ್ತಿದ್ದೇನೆ.<BR/>ನಿಮಗೆ ಇಡೀ ಲೇಖನ ಬ್ರಾಹ್ಮಣ ವಿರೋಧಿ ಪೂರ್ವಾಗ್ರಹದಿಂದಲೇ ಬರೆದಂತೆ ಕಂಡರೆ ಅದು ನಿಮ್ಮ ದೃಷ್ಟಿದೋಷವನ್ನು ಸೂಚಿಸುತ್ತದೆ. ರಾಮಚಂದ್ರಗೌಡರು ಇದು ವೀರಶೈವರ ಸರ್ಕಾರ ಅಂತಲೋ ಒಕ್ಕಲಿಗರ ಸರ್ಕಾರ ಅಂತಲೋ ಕರೆದಿದ್ದರೂ ನಾನು ಹೀಗೇ ಬರೆಯುತ್ತಿದ್ದೆ.<BR/>ಪ್ರಿಯ ಶ್ರೀಕಾಂತ್, ದೇಶದ ಸಾಮಾಜಿಕ ಇತಿಹಾಸದ ಕುರಿತಾಗಿ ಒಂದಷ್ಟು ಅಧ್ಯಯನ ಮಾಡಲು ಯತ್ನಿಸಿ. ಡಾ.ಬಿ.ಆರ್.ಅಂಬೇಡ್ಕರ್, ಡಾ.ರಾಮಮನೋಹರ್ ಲೋಹಿಯಾ ಅವರ ಕೃತಿಗಳನ್ನು ಒಂದಷ್ಟು ಓದಿ. ಓದಿದ ಮೇಲೆ ನಿಮ್ಮ ಅಭಿಪ್ರಾಯಗಳು ಬದಲಾಗಬಹುದು. ನಿಮಗೆ ಒಳ್ಳೆಯದಾಗಲಿ.<BR/>ಪ್ರೀತಿಯಿಂದ,ದಿನೇಶ್ ಕುಮಾರ್ ಎಸ್.ಸಿ.https://www.blogger.com/profile/13353280392827060909noreply@blogger.comtag:blogger.com,1999:blog-5706152753465599900.post-38586728792934088352008-12-29T16:20:00.000+05:302008-12-29T16:20:00.000+05:30ರಾಜಕಾರಣಿಗಳು, ಮಂತ್ರಿಗಳು ಆಯಾ ಸಮುದಾಯದ ಸಮಾರಂಭಗಳಿಗೆ ಹೋದ...ರಾಜಕಾರಣಿಗಳು, ಮಂತ್ರಿಗಳು ಆಯಾ ಸಮುದಾಯದ ಸಮಾರಂಭಗಳಿಗೆ ಹೋದಾಗ ಈ ರೀತಿ ಹೇಳುವುದು ಸಾಮಾನ್ಯ. ತಮ್ಮದು ಹಿಂದುಳಿದವರ ಪಾರ್ಟಿ, ದಲಿತರ ಪಾರ್ಟಿ ಅಂತ ಹೇಳಿಕೊಂಡು ಓಡಾಡುವುದಿಲ್ಲವೇ ಎಷ್ಟೋ ಜನ.<BR/>ಆದರೆ ಬ್ರಾಹ್ಮಣರ ಬಗ್ಗೆ ಹೇಳಿದಾಗ ಮಾತ್ರ ಕೆಂಗಣ್ಣು ಯಾಕೆ?<BR/>ಮಾಯಾವತಿ ದಲಿತರ ಸರ್ಕಾರ ಅಂತ ಹೇಳಿಕೊಂಡಾಗ ನೀವು ಹುಟ್ಟಿರಲಿಲ್ಲವಾ ಇನ್ನೂ?! ಅಥವಾ ಬುದ್ಧಿ ಬೆಳೆದಿರಲಿಲ್ಲವಾ?<BR/><BR/>ಬ್ರಾಹ್ಮಣರ ಮಾರ್ಗದರ್ಶನ ಬೇಕು ಅಂದರೆ ಒಕ್ಕಲಿಗರ ಮಾರ್ಗದರ್ಶನ ಬೇಡ ಎಂದು ಅರ್ಥ ಹೇಗೆ ಆಗುತ್ತದೆ? ಒಬ್ಬರದ್ದು ಬೇಕು ಅಂದರೆ ಇನ್ನೊಬ್ಬರದ್ದು ಬೇಡ ಎಂದು ಅರ್ಥವಲ್ಲ. ಬ್ರಾಹ್ಮಣ ಮಾರ್ಗದರ್ಶನ ಮಾತ್ರ ಬೇಕು ಎಂದಿದ್ದರೆ ಆಗ ತಪ್ಪಾಗುತ್ತಿತ್ತು. ವಿಷಯ ತಿರುಚಿದ್ದೀರಿ.<BR/><BR/><I>ಬ್ರಾಹ್ಮಣರಿಗೆ ಎಲ್ಲ ಕ್ಷೇತ್ರಗಳಲ್ಲೂ ಮೊದಲ ಆದ್ಯತೆ ಎಂಬ ಮಂತ್ರವನ್ನು ಎಲ್ಲ ಸಮುದಾಯಗಳೂ ಪ್ರತಿಭಟನೆಯೇ ಇಲ್ಲದಂತೆ ಒಪ್ಪಿಕೊಂಡಿವೆ</I> ಇದ್ಯಾವ ದೇಶದಲ್ಲಿ ಅಂತ ಸ್ವಲ್ಪ ಹೇಳ್ತೀರಾ? ತಮಾಷೆಯಾಗಿದೆ. ನಾನಂತೂ ನೋಡಿಲ್ಲ. <BR/><BR/><I>‘ಬ್ರಹ್ಮಹತ್ಯೆ ಮಹಾಪಾಪ’ ಎಂಬ ಭಾವ ಈ ದೇಶದ ಶೂದ್ರರ ನರನಾಡಿಗಳಲ್ಲೂ ಸೇರಿಹೋಗಿದೆ. ಬ್ರಾಹ್ಮಣನನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸುವುದನ್ನು ಈ ಜನ ಕಲ್ಪಿಸಿಕೊಳ್ಳಲಿಕ್ಕೂ ಬೆದರುತ್ತಾರೆ.</I><BR/>ಸ್ವಾಮಿ , ಇಂತಹುದನ್ನು ನೀವು ಬ್ರಾಹ್ಮಿನ್ ಫೋಬಿಯಾಗೆ ಸಮರ್ಥನೆಯನ್ನಾಗಿ ಬಳಸಿಕೊಂಡಿರುವುದು ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಮನುಷ್ಯ ಮನುಷ್ಯನನ್ನು ಕೊಲ್ಲುವುದು, ಹಿಂಸಿಸುವುದು ತಪ್ಪು. ಅದಕ್ಕೂ ಜಾತಿಯ ಬಣ್ಣ ಹಚ್ಚಬೇಡಿ. ಹಾಗಿದ್ದರೆ ನಿಮ್ಮದೇ ರೀತಿಯಲ್ಲಿ ಹೇಳಲು ಹೋದರೆ ’ಬ್ರಹ್ಮಹತ್ಯೆ’ ತಪ್ಪು ಅಲ್ಲವಾ?<BR/><BR/>ಖಂಡಿತ ಬ್ರಾಹ್ಮಣರಿಗೆ ಮತ್ತು ಇತರ ಸಮುದಾಯದವರಿಗೆ ಇವಳ ಹೇಳಿಕೆಯಿಂದ ಕಿರಿಕಿಯಾಗುವುದಿಲ್ಲ ಆದರೆ ಇದಕ್ಕೆ ಬೇರೆ ಬೇರೆಯ ಬಣ್ಣ , ಮಸಾಲೆ ಅರೆಯುವ ತಮ್ಮಂತವರಿಂದ ಕಿರಿಕಿಯಾಗುವುದು ಮತ್ತು ಜಾತಿದ್ವೇಷ ಮನಸ್ತಾಪ ಬೆಳೆಯುತ್ತದೆ. <BR/><BR/>ಬ್ರಾಹ್ಮಣರ ಸರ್ಕಾರ ಅಂತ ಹೇಳಿದ್ದರೆ ಅದು ಮಾತ್ರ ಖಂಡಿತ ತಪ್ಪು. ಅದನ್ನು ಬ್ರಾಹ್ಮಣರಾದಿಯಾಗಿ ಎಲ್ಲರೂ ಖಂಡಿಸುವಂತದ್ದೇ. ಆದರೆ ಉಳಿದ ದೇಸೀ ಮಾತೆಲ್ಲವೂ ಬ್ರಾಹ್ಮಣ ವಿರೋಧೀ ಪೂರ್ವಗ್ರಹದಿಂದಲೇ ಬರೆದಂತಿದೆ.Anonymousnoreply@blogger.comtag:blogger.com,1999:blog-5706152753465599900.post-77877028571223031402008-12-29T15:05:00.000+05:302008-12-29T15:05:00.000+05:30ಸರಿಯಾದ.. ಸಮರ್ಥ ಉತ್ತರ.. ರಾಮಚಂದ್ರೆಗೌಡರಿಗೆ..ನಿಮ್ಮ ಲೇಖ...ಸರಿಯಾದ.. ಸಮರ್ಥ ಉತ್ತರ.. ರಾಮಚಂದ್ರೆಗೌಡರಿಗೆ..<BR/><BR/>ನಿಮ್ಮ ಲೇಖನ ನನಗಿಷ್ಟವಾಯಿತು..<BR/><BR/>ವಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5706152753465599900.post-83812187754313590762008-12-29T12:54:00.000+05:302008-12-29T12:54:00.000+05:30ಏನೇ ಬರೆದರೂ ಕನ್ವಿನ್ಸಿಂಗ್ ಅಗಿ ಬರೆಯುತ್ತೀರಿ. ರಾಮಚಂದ್ರಗ...ಏನೇ ಬರೆದರೂ ಕನ್ವಿನ್ಸಿಂಗ್ ಅಗಿ ಬರೆಯುತ್ತೀರಿ. <BR/>ರಾಮಚಂದ್ರಗೌಡರಿಗೆ ಸಂವಿಧಾನ, ಪ್ರಜಾಪ್ರಭುತ್ವ ಎಂದರೆ ಏನೇನೂ ಅರ್ಥವಾಗುವುದಿಲ್ಲ. ಅಲ್ಪನಿಗೆ ಅಧಿಕಾರ ಸಿಕ್ಕಂತಾಗಿದೆ ಅವರ ಕಥೆ.<BR/>ಪ್ರಜಾಪ್ರಭುತ್ವದ ಅ ಆ ಇ ಈ ಗೊತ್ತಿಲ್ಲದ ಇಂಥವರು ಮಂತ್ರಿಯಾಗಿದ್ದಾರೆ ಎಂಬುದೇ ದುರಂತ.<BR/>ರಾಮಚಂದ್ರಗೌಡ ವಿರುದ್ಧ ವಿಪಕ್ಷಗಳ ನಾಯಕರೂ ಏನನ್ನೂ ಮಾತನಾಡದೇ ಇರಬಹುದು. ಯಾಕೆಂದರೆ ಅವರೂ ಸಹ ನೀವು ಹೇಳಿದಂತೆ ಬ್ರಾಹ್ಮಿನ್ ಫೋಬಿಯಾಗೆ ಒಳಗಾದವರೇ ಆಗಿರುತ್ತಾರೆ.Anonymousnoreply@blogger.comtag:blogger.com,1999:blog-5706152753465599900.post-80008645449048862382008-12-29T09:48:00.000+05:302008-12-29T09:48:00.000+05:30ಪ್ರಿಯ ಅಶೋಕ್,ನಿಮ್ಮ ಬ್ಲಾಗ್ ನೋಡಿದೆ, ಖುಷಿಯಾಯಿತು. ನೀವು ...ಪ್ರಿಯ ಅಶೋಕ್,<BR/>ನಿಮ್ಮ ಬ್ಲಾಗ್ ನೋಡಿದೆ, ಖುಷಿಯಾಯಿತು. ನೀವು ಸಕಲೇಶಪುರದವರು ಎಂಬುದು ಖುಷಿಗೆ ಕಾರಣ.<BR/>ಇನ್ನು ನಿಮ್ಮ ಪ್ರತಿಕ್ರಿಯೆಯ ಕುರಿತು ಹೇಳುವುದಾದರೆ ರಾಮಚಂದ್ರಗೌಡರು ಒಂದು ವೇಳೆ ಬಿಜೆಪಿ ಬ್ರಾಹ್ಮಣರ ಪಕ್ಷ ಎಂದು ಹೇಳಿದ್ದರೆ ನಿಮ್ಮ ಮಾತಿನಂತೆ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ.<BR/>ಅವರ ಹೇಳಿಕೆಯನ್ನು ಸ್ಪಷ್ಟವಾಗಿ ಗಮನಿಸಿ. ಇದು ಬ್ರಾಹ್ಮಣರ ಸರ್ಕಾರ ಎಂದು ಹೇಳಿದ್ದಾರೆ. ಪಕ್ಷ ಬೇರೆ, ಸರ್ಕಾರ ಬೇರೆ.<BR/>ಪಕ್ಷ ಎಲ್ಲರದ್ದೂ ಆಗಿರದಿದ್ದರೆ ಅದು ಅವರ ಪಾಡು, ಅವರ ಮಿತಿ, ಸರ್ಕಾರ ಹಾಗಲ್ಲ; ಅದು ಎಲ್ಲರದ್ದೂ ಆಗಿರುತ್ತದೆ.<BR/>ನಿಮ್ಮ ಬ್ಲಾಗ್ನಲ್ಲಿ ಎಲ್ಲ ಹೂವುಗಳು ಘಮಗುಡುತ್ತಿರಲಿ ಎಂದು ಆಶಿಸುತ್ತ,<BR/>ಪ್ರೀತಿಯಿಂದ<BR/>ದಿನೇಶ್ದಿನೇಶ್ ಕುಮಾರ್ ಎಸ್.ಸಿ.https://www.blogger.com/profile/13353280392827060909noreply@blogger.comtag:blogger.com,1999:blog-5706152753465599900.post-19906198719810665832008-12-28T19:34:00.000+05:302008-12-28T19:34:00.000+05:30ಇದರ ಬಗ್ಗೆ ಇಷ್ಟೊಂದು ತಲೆಕೆಡೆಸಿಕೊಳ್ಳಬೇಕಾದ ಅಗತ್ಯವಿಲ್ಲ ...ಇದರ ಬಗ್ಗೆ ಇಷ್ಟೊಂದು ತಲೆಕೆಡೆಸಿಕೊಳ್ಳಬೇಕಾದ ಅಗತ್ಯವಿಲ್ಲ ಎನಿಸುತ್ತೆ.ಬಿಜೆಪಿ ಬ್ರಾಹ್ಮಣರದ್ದು(ವೀರಶೈವರದ್ದೂ?!)ಜೆಡಿಎಸ್ ಗೌಡರದ್ದು,ಕಾಂಗ್ರೆಸ್ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರದ್ದು ಎಂಬುದು ಜನಮನದಲ್ಲಿ ಬೇರೂರಿಲ್ಲವೇ?<BR/>ಅಶೋಕ ಉಚ್ಚಂಗಿ<BR/>http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-5706152753465599900.post-51684299356408418192008-12-28T14:34:00.000+05:302008-12-28T14:34:00.000+05:30A well-knit intellectual reply to Ramachandra Gowd...A well-knit intellectual reply to Ramachandra Gowda's statement. A commendable point in the write-up is that you have not restricted yourself to criticise R Gowda. You have analysed what made him to say so.<BR/>It is sad that a communication with 3 pc gets 13 positions of cabinet rank. It is high time that other communities get up and demand their rights.<BR/>- AnnamahadevaAnonymousnoreply@blogger.com